ಗಜಮುಖ ಗಣಪಾ

ಗೌರಿ ಗಣೇಶ ಹಬ್ಬದ ಹಾರ್ಧಿಕ ಶುಭಾಶಯಗಳು…

ಹಬ್ಬ ಬಂತು, ಹಬ್ಬ ಬಂತು ಅಂತ ಹಬ್ಬದ ತಯಾರಿ ಮಾಡಿ ಮುಗಿಸೋ ಹೊತ್ತಿಗೆ ಹಬ್ಬ ಮುಗಿದೆ ಹೋಯ್ತು ನೋಡಿ, ನೋಡ್ತಾ ನೋಡ್ತಾ ನಮ್ಮ ಗಣೇಶನ ಹಬ್ಬ ಮುಗಿದು 5 ದಿನ ಕಳೆದೆ ಹೋಯ್ತು. ನಮ್ಮ ಮನೆಯ ಹಬ್ಬದ ಸಮಾಚಾರವನ್ನು ಸ್ನೇಹಿತರಾದ ನಿಮ್ಮೆಲ್ಲರೊಂದಿಗೂ ಹಂಚಿಕೊಳ್ಳೋಣ, ತಮಗೆಲ್ಲರಿಗೂ ತಡವಾದರೂ ಪರವಾಗಿಲ್ಲ ಸಂದೇಶ ತಿಳಿಸೋಣ ಅಂತ ಬರೀತಾ ಇದೀನಿ. ನೀವೆಲ್ಲರೂ ಹಬ್ಬ ಚೆನ್ನಾಗೆ ಅಚರಿಸಿರ್ತೀರ. ನಾವು ಕೂಡ ಹಬ್ಬದ ಆನಂದ, ಮತ್ತು ಭಕ್ಷ್ಯ ಗಳನ್ನು ಸವಿಯೋದಕ್ಕೆ ಕೆಲವು ಸ್ನೇಹಿತರನ್ನು ಮನೆಗೆ ಕರೆದು, ಅವರೊಂದಿಗೆ ಜೊತೆಗೂಡಿ ಹಬ್ಬದ ಆಚರಣೆ ಮಾಡಿದ್ವಿ. ನಮ್ಮ ಮನೆಗೆ ಬಂದು ಹರಸಿ, ಸಂತಸವನ್ನು ನೀಡಿದ ವಿಘ್ನ ವಿನಾಶಕ ವಿನಾಯಕ, ತಮಗೆಲ್ಲರಿಗೂ ಕೂಡ ಒಳ್ಳೆಯದನ್ನು ಮಾಡಲಿ.

ಬನವಾಸಿಯ ಅರ್ಧ ಗಣಪತಿ
1

ಪ್ರಥಮಮ್ ವಕ್ರತುಂಡಂ ಚ ಏಕದಂತಂ ದ್ವಿತೀಯಕಮ್
ತ್ರತೀಯಂ ಕೃಷ್ಣಪಿಂಗಾಕ್ಷಂ ಗಜವಕ್ಟ್ರಮ್ ಚತುರ್ಥಕಮ್
ಲಂಬೋದರಮ್ ಪಂಚಾಮಮ್ ಚ ಶಷ್ಟಮ್ ವಿಕತಮೆವಚ
ಸಪ್ತಮಮ್ ವಿಘ್ನರಾಜೇಂದ್ರಮ್ ಧೂಮ್ರವರ್ಣಂ ತಥಾಶ್ಟಕಮ್
ನವಮಮ್ ಬಾಲಚಂದ್ರಮ್ ಚ ದಶಮಾಮ್ ತು ವಿನಾಯಕಮ್
ಏಕಾದಶಮ್ ಗಣಪತಿಮ್ ದ್ವಾದಶಮ್ ತು ಗಜಾನನಮ್
ದ್ವಾದಶೈತಾನಿ ನಾಮಾನಿ ತ್ರಿಸಂಧ್ಯಾಹ ಪಠೆನ್ನರಹ
ನ ಚ ವಿಘ್ನ ಭಯಂ ಹರಮ್ ತಸ್ಯ ಸಿದ್ಧಿ ಕರಮ್ ಪ್ರಭೊ

ನಮ್ಮ ಮನೆಯ ಗಣೇಶ ಚೌತಿ
Ganesh chaturthi

Published in: on ಆಗಷ್ಟ್ 28, 2009 at 2:30 AM  Comments (9)  

ಬದುಕಿನ ಮುಖಗಳು

ಬದುಕಿನ ಮುಖಗಳ ಪರಿಚಯವನ್ನು ಕೆಲವೊಮ್ಮೆ ನಮ್ಮ ಜೀವನದ ಸಣ್ಣ ಸಣ್ಣ ಘಟನೆಗಳು ಮಾಡಿ ಕೊಡುತ್ತವೆ. ಅಂಥದ್ದೇ ಒಂದು ಪುಟ್ಟ ಘಟನೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ..

ಮೊನ್ನೆ ಮೊನ್ನೆ ನಾವು ಮನೆ ಚೇಂಜ್ ಮಾಡಿದಾಗ ಶಿಫ್ಟಿಂಗ್ ಕಷ್ಟಕ್ಕಿಂತ ನಮಗೆ ಎದುರಾಗಿದ್ದು ಉುಟದ ಚಿಂತೆ. ಮನೆಯ ಸಾಮಾನುಗಳನ್ನೆಲ್ಲ ಪ್ಯಾಕ್ ಮಾಡಿ, ಹೊಸ ಮನೆಗೆ ತಂದು ಬಿಚ್ಚಿ ಜೋಡಿಸುವ ತನಕ ನಾವು ಅಡುಗೆ ಮಾಡುವಂತಿಲ್ಲ. ಬೇಗ ಹೊಟೆಲ್ ಗೆ ಹೋಗಿ ಉುಟ ಮಾಡಿಕೊಂಡು ಬಂದುಬಿಡೋಣ ಅಂದ್ರೆ, ಮನೆಯಿಂದ ಅರ್ಧ ಗಂಟೆ ಪ್ರಯಾಣ ಮಾಡಿದ್ರೆ ಮಾತ್ರ ನಮ್ಮ ಸಸ್ಯಾಹಾರದ ಹೊಟೆಲ್ ಸಿಗುತ್ತೆ. ಹೋಗ್ಲಿ ಮನೆಗೆ ಪಾರ್ಸಲ್ ತರಿಸೋಣ ಅಂದ್ರೆ ಇಬ್ಬರಿಗೆ ತರಿಸುವ ಉುಟದ ಹಣಕ್ಕಿಂತ ಮನೆಗೆ ತಂದುಕೊಡುವ ಖರ್ಚೆ ಹೆಚ್ಚಾದಂತೆ ತೋರಿತು. ಮನೆಯ ಹತ್ತಿರ ಇರುವ food court ಎಂಬಲ್ಲಿ ಚೀನೀಯರ, ಮಲೈ ಜನರ ಮಾಂಸದ ಉುಟದ ಭಂಡಾರ. ಅಲ್ಲೇ ಇರುವ ಇನ್ನೊಂದು ಚಿಕ್ಕ ಇಂಡಿಯನ್ ಮುಸ್ಲಿಮ್ ಕ್ಯಾಂಟೀನ್ ನಲ್ಲಿ ಸಿಗುವುದು ಕೂಡ ಮಾಂಸದ ಉುಟವೇ…ಎಣ್ಣೆಯಲ್ಲಿ ಅದ್ದಿದನ್ತಹ ಪ್ಲೇನ್ ಪರಾಟ ಮತ್ತು ದಾಲ್ ಇದು ಮಾತ್ರ ಅಲ್ಲಿ ಸಿಗುವ ಮಾಂಸವಿಲ್ಲದ ಉುಟ.

ಮನೆ ಶಿಫ್ಟ್ ಮಾಡಿ ಜೋಡಿಸುವುದೋ ಅಥವಾ 3 ಹೊತ್ತು ಅರ್ಧ ಗಂಟೆ ಪ್ರಯಾಣ ಮಾಡಿ ಉುಟ ಮಾಡಿಕೊಂಡು ಮತ್ತೆ ಅರ್ಧ ಗಂಟೆ ಪ್ರಯಾಣ ಮಾಡಿ ಮನೆ ತಲುಪುವುದೋ ಅನ್ನುವ ಸಮಸ್ಯೆ. ಹೀಗೆ ಉುಟದ ಚಿಂತೆ ಮಾಡಿಕೊಂಡು ಕುಳಿತಾಗ ಅನೇಕ ಯೋಚನೆಗಳು, ನೆನಪುಗಳು ತಲೆಯಲ್ಲಿ ಸುಳಿದಾಡಿದವು.

ನಾವು ನಮ್ಮ ಉುರಲ್ಲಿದ್ದರೆ ಯಾರಾದರೂ ನೆಂಟರು, ಇಷ್ಟರು, ಸ್ನೇಹಿತರು ಮನೆಗೆ ಬಂದು ಉುಟ ಮಾಡಿಕೊಂಡು ಹೋಗಿ ಅಂತ ಕರೀತಾ ಇದ್ರು, ಇಲ್ಲ ಅಂದರು ಅಲ್ಲಿ ಸಸ್ಯಾಹಾರಿ ಹೋಟೆಲ್‍ಗಳಿಗಂತು ಬರವಿಲ್ಲ.. ಇಲ್ಲೂ ಕೂಡ ಯಾರಾದರೂ ನಮ್ಮ ಮನೆಗೆ ಬಂದು ಉುಟ ಮಾಡಿಕೊಂಡು ಹೋಗಿ ಅಂತ ಕರೆಯ ಬಾರದೇ ಅಂತ ಅನ್ನಿಸಿದ್ದು ಸುಳ್ಳಲ್ಲ. ನಾನು ಮೊದಲು ಉುರಲ್ಲಿದ್ದಾಗ ಎಷ್ಟೊಂದು ಜನರ ಮನೆಗೆ ಉುಟಕ್ಕೆ ಹೋಗುವುದನ್ನು ಬೇಕೆಂದೇ ತಪ್ಪಿಸಿಕೊಂಡಿದ್ದೆ. ಅಪ್ಪ, ಅಮ್ಮ ನೀವು ಹೋಗಿಬನ್ನಿ ನಾನು ಬರೋದಿಲ್ಲ, ಮನೆಯಲ್ಲೇ ಇರ್ತೇನೆ ಅಂತ ಬೇಕಷ್ಟು ಸರಿ ಅಂದಿದ್ದೆ. ಅಕ್ಕ ಪಕ್ಕದ ಮನೆಗಳಲ್ಲಿ ವಿಶೇಷವಿದ್ದಾಗ, ಮನೆಗೆ ಬಂದು ಕರೆದು ಹೋದರು ಸಹ ಯಾರು ಹೋಗ್ತಾರೆ ಅಂತ ಬಹಳಷ್ಟು ಸಲ ಮನೆಯಲ್ಲೇ ಉಳಿದಿದ್ದೆ. ಈಗ ಅವರೆಲ್ಲರ ನೆನಪು ಕಣ್ಣ ಮುಂದೆ ಬಂತು. ಉುರಲ್ಲಿ ಇದ್ದಾಗ, ಕರೆದಾಗ ಹೋಗಿಲ್ಲ. ಈಗ ಹೋಗಬಹುದಿತ್ತು ಆದರೆ ಯಾರು ಕರೆಯುತ್ತಿಲ್ಲ … ಇವೇ ಅಲ್ಲವೇ ಜೀವನದ ಚಿಕ್ಕ ಪುಟ್ಟ ಬದಲಾವಣೆಯ ಮುಖಗಳು?

ಆಮೇಲೆ ಬೇರೆ ದಾರಿಯಿಲ್ಲವಾದ್ದರಿಂದ ಒಂದು ಹೊತ್ತು ಪರಾಟ, ಇನ್ನೊಂದು ಹೊತ್ತು ಅರ್ಧ ಗಂಟೆ ಪ್ರಯಾಣ, ಇನ್ನೊಂದು ಹೊತ್ತು ಮನೆಯಲ್ಲಿ ಕಾರ್ನ್‌ಫ್ಲೇಕ್ಸ್ ತಿಂದು 2 ದಿನ ಕಳೆಯಿತು. ಮೂರನೆಯ ದಿನ ಮನೆಯಲ್ಲಿ ಅಡುಗೆ ಮಾಡಿದಾಗ, ಅದನ್ನು ಉುಟ ಮಾಡುವಾಗ ಏನೋ ಸಂಭ್ರಮ, ಯಾವುದೋ ಸಂತೋಷ…ಬಣ್ಣಿಸಲಾಗದು…….

Published in: on ಆಗಷ್ಟ್ 28, 2009 at 1:57 AM  Comments (6)